Slide
Slide
Slide
previous arrow
next arrow

ಶಾಸಕ ಬೇಳೂರು ಗೋಪಾಲಕೃಷ್ಣಗೆ ನಾಮಧಾರಿ ಸಂಘದಿಂದ ಸನ್ಮಾನ

300x250 AD

ಅಂಕೋಲಾ: ಪಟ್ಟಣದ ಪುರಲಕ್ಕಿಬೇಣದ ಉಷಾ ನಾಯ್ಕ ಮತ್ತು ಎಂ.ಬಿ.ನಾಯ್ಕ ಅವರ ಮನೆಗೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ ನೀಡಿದರು. ಅನ್ಯ ಕಾರ್ಯಕ್ರಮದ ನಿಮಿತ್ತ ತಾಲೂಕಿಗೆ ಆಗಮಿಸಿದ ಶಾಸಕರು ಇಲ್ಲಿಗೆ ಆಗಮಿಸಿದ್ದರು.

ಡಾ.ಕರುಣಾಕರ ನಾಯ್ಕ, ಡಾ. ರಕ್ಷಿತಾ, ಸುಶೀಲಾ ಎಚ್., ರಾಘವೇಂದ್ರ ಎಂ.ಎಚ್ ಉಪಸ್ಥಿತರಿದ್ದು, ಕುಟುಂಬದ ಪರವಾಗಿ ಶಾಸಕರಿಗೆ ಸನ್ಮಾನಿಸಿ ಗೌರವಿಸಿದರು. ಇವರ ಜತೆಗೆ ರಾಷ್ಟ್ರೀಯ ಈಡಿಗ ಮಹಾಮಂಡಳಿ, ಕರ್ನಾಟಕ ಆರ್ಯ ಈಡಿಗ ನಾಮಧಾರಿ ಸಂಘದವರು ಶಾಸಕರನ್ನು ಸನ್ಮಾನಿಸಿ ಗೌರವಿಸಿದರು.

300x250 AD

ಈ ಸಂದರ್ಭದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಅಧ್ಯಕ್ಷ ಡಿ.ಜಿ. ನಾಯ್ಕ, ಗೌರವಾಧ್ಯಕ್ಷ ಮಾದೇವ ಎಂ. ನಾಯ್ಕ, ಪ್ರಧಾನ ಕಾರ್ಯದರ್ಶಿ ನಾಗರಾಜ ಮಂಜಗುಣಿ, ಉಪಾಧ್ಯಕ್ಷ ರಮೇಶ ಎನ್. ನಾಯ್ಕ ಹಾಗೂ ಕರ್ನಾಟಕ ಆರ್ಯ ಈಡಿಗ ನಾಮಧಾರಿ ಸಂಘದ ಅಧ್ಯಕ್ಷ ಎಂ.ಪಿ. ನಾಯ್ಕ, ಲೇಖಕ ಮಹಾಂತೇಶ ರೇವಡಿ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top